Sunday, September 14, 2008

''Employee Introduction Programe'' Vs ನನ್ನ ಹಾಸ್ಟೆಲ್ ನ ಮೊದಲನೆ ದಿನ

ಅಗಸ್ಟ್ ತಿಂಗಳ ಕೊನೆಯ ವಾರದಲ್ಲಿ ನಾನು ರತ್ನಮಾನಸದ ಎಂಟನೇ ತರಗತಿ ಸೇರಿಕೊಂಡಿದ್ದೆ. ಮೊನ್ನೆ ಮೊನ್ನೆ ಆಮೀರ್ ಖಾನ್ ನ ತಾರೆ ಜಮೀನ್ ಪರ್ ನೋಡಿದಾಗ, ನಾನು ಆ ಹುಡುಗನ ಪಾತ್ರದಲ್ಲಿ ಹನ್ನೇರಡು ವಷ೯ಗಳ ಹಿಂದೆ ಉಜಿರೆಯ ರತ್ನಮಾನಸದ ಅಂಗಳದಲ್ಲಿ ಹೆತ್ತವರು ನನ್ನ ಬಿಟ್ಟು ಹೋರಟು ನಿಂತಾಗ ನಾನು ಅಳುತ್ತ ಒಳಗೋಡಿದ್ದ ನೆನಪು ಮಾತ್ರ ಮತ್ತೆ ಮತ್ತೆ ಬರುತ್ತದೆ.


ಮಾರನೆ ದಿನ ಜೂನ್ ಒಂದನೇ ತಾರೀಕು, ಶಾಲಾ ದಿನದ ಮೊದಲನೆ ದಿನ. ಬೆಳಿಗ್ಗೆ ಐದು ಘಂಟೆಗೆ ಬೆಲ್ ಬಾರಿಸಿದಾಗ, ನಾವೆಲ್ಲರು ಮಲಗಿದ್ದ ಹಾಲ್ ಗಳಲ್ಲಿ ಬೆಳ್ಳಂಬೆಳಕು, ಹುಡುಗರೆಲ್ಲಾ ತರಾತುರಿಯಾಗಿ ಬ್ರೇಷ್ ಹಿಡ್ಕೊಂಡು ಹೋರಗಡೆ ಹಲ್ಲುಜ್ಜಲು ಹೋಗ್ತಾ ಇದ್ರೆ, ನಾನು ಮಾತ್ರ ಚಾಪೆಯಲ್ಲಿ ಕುಳಿತು, ನನ್ನನ್ನು ಹಾಸ್ಟೆಲ್ ಕಳಿಸುವ ಐಡಿಯಾ ನಮ್ಮನೆಯಲ್ಲಿ ಯಾರದ್ದಿರ ಬಹುದೆಂದು ಯೋಚಿಸುತ್ತಿದ್ದೆ.


ಒಂದು ಕುರಿ ಮತ್ತೊಂದು ಕರಿಯನ್ನು ಹಿಂಬಾಲಿಸಿದಂತೆ ನಾನು ಕೂಡ, ಜೂನ್ ತಿಂಗಳ ಪಿರಿಪಿರಿ ಮಳೆಯಲ್ಲಿ ಬಾವಿಕಟ್ಟೆಯಲ್ಲಿ ಹಲ್ಲುಜ್ಜಿ ಪ್ರಾಥ೯ನಾ ಹಾಲ್ ಗೆ ಸಮಯಕ್ಕೆ ಸರಿಯಾಗಿ ಬಂದಿದ್ದೆ. ಆ ದಿನದ ಮಟ್ಟಿಗೆ ಎಂಟನೇ ತರಗತಿಯವರ ಮಟ್ಟಿಗೆ ಹಾಸ್ಟೆಲ್ ನ ಎಲ್ಲಾ ವಿಷಯಗಳು ಹೊಸತು. ಹಿರಿಯ ವಿದ್ಯಾಥಿ೯ಗಳು ಮಾಡುವ ಯೋಗಾಸನವನ್ನು ಕುಳಿತು ವೀಕ್ಷಣೆ ಮಾಡಿ, ಮುಂದಿನ ದಿನಗಳಲ್ಲಿ ನಾವು ಅಭ್ಯಾಸ ಮಾಡಬೇಕಾಗಿತ್ತು. ನಮ್ಮನ್ನು ಯೋಗಾಸನದಿಂದ ಹಿಡಿದು ಅಡುಗೆ ಮಾಡಿ ಬಡಿಸುವವರೆಗಿನ ತರಭೇತುಗೊಳಿಸುವುದು ಹಿರಿಯ ವಿದ್ಯಾಥಿ೯ಗಳ ಜವಾಬ್ಧಾರಿಯಾಗಿತ್ತು. ಜೀವನ ಶಿಕ್ಷಣದ ಮೊದಲನೆ ದಿನ ಆರಂಭವಾಗಿತ್ತು.


ನಾನೀಗ ಕೆಲಸ ಮಾಡುತ್ತಿರುವ ಕಾಪೋ೯ರೇಟ್ ಕಂಪನಿಗಳ ನೀತಿಗೂ, ಎಂಟನೇ ತರಗತಿಯ ರತ್ನಮಾನಸದ ದಿನಚರಿ ಮತ್ತು, ಕೆಲಸ ನಿರ್ವಹಿಸುವ ಕ್ರಮಕ್ಕೂ ಬಹಳ ಸಾಮ್ಯೆತೆ ಇದೆ. ಉದಾಹರಣೆಗೆ ಕಾಪೋ೯ರೇಟ್ ಕಂಪನಿಗಳಲ್ಲಿ ಹೊಸ ಉದ್ಯೋಗಿಗಳನ್ನು ''Employee Introduction Programe'' ಮೂಲಕ ಕಂಪನಿಯ ರೀತಿ, ನೀತಿಗಳನ್ನು ಪರಿಚಯಿಸಿದರೆ, ಅದೇ ರತ್ನಮಾನಸದಲ್ಲಿ, ಅದು ಹಿರಿಯ ವಿದ್ಯಾಥಿ೯ಗಳ ಮಟ್ಟಿಗೆ ವಸತಿ ಪಾಲಕರ ನಿದೇ೯ಶನದಲ್ಲಿ ಕಿರಿಯ ವಿದ್ಯಾಥಿ೯ಗಳನ್ನು ನೋಡಿ, ಮಾಡಿ, ಕಲಿತುಕೊಳ್ಳುವಂತೆ ತರಭೇತುಗೊಳಿಸುವುದು ಜೀವನ ಶಿಕ್ಷಣದ ಭಾಗವಾಗಿತ್ತು. ಎಲ್ಲಿಯೂ ಕೂಡ ಕಿರಿಯ ವಿದ್ಯಾಥಿ೯ಗಳಿಗೆ ಮಾಹಿತಿಯ ಕೊರತೆ ಇರಲಿಲ್ಲ. ಯಾಕೆಂದರೆ ರತ್ನಮಾನಸದ ದಿನಚರಿ ಅಲ್ಲಿನ ವಿದ್ಯಾಥಿ೯ಗಳ ಜೀವನ ಕ್ರಮವಾಗಿತ್ತು.ವಸತಿ ಪಾಲಕರುಗಳ ಅನಪಸ್ಥಿತಿಯಲ್ಲೂ ಕರಾರುವಕ್ಕಾಗಿ ವಿದ್ಯಾಥಿ೯ ನಿಲಯ ಕಾರ್ಯನಿವ೯ಹಿಸುತ್ತಿತ್ತು. ಕಾರಣ ಸಿಂಪಲ್ Rathnamanasa is a Process Oriented Hostel, not a warden/Person oriented Hostel.


''Employee Introduction Programe'' ಗಳು ಕೆಲವು ಕಂಪನಿಗಳಲ್ಲಿ ಹೊಸ ಉದ್ಯೋಗಿಗಳ ಮಟ್ಟಿಗೆ ಹನಿಮೂನ್ ಇದ್ದ ಹಾಗೆ.ಮ್ಯಾನೇಜರು ಗಳ ಅನಪಸ್ಥಿತಿ ಕೆಲವರಿಗೆ ಹಬ್ಬವಾದರೆ, ಕೆಲವರಿಗೆ ದಪ೯ ತೋರಿಸುವ ಅವಕಾಶ. ಕಂಪನಿಯ ಆ ದಿನದ ವ್ಯವಹಾರದ ಮಟ್ಟಿಗೆ ಸ್ವಲ್ಪ ಹಿನ್ನಡೆ. Most of the companies are trying to implement process orient business, instead of person oriented business.


ಕಾಪೋ೯ರೇಟ್ ಕಂಪನಿಗಳು ತನ್ನ ಕಂಪನಿಯ ಪಾಲಿಸಿಗಳನ್ನು ವಿದ್ಯಾವಂತ ಉದ್ಯೋಗಿಗಳಲ್ಲಿ ಒದ್ದಾಡಿಕೊಂಡು ಕಷ್ಟಪಟ್ಟು ಅಳವಡಿಸಿದರೆ, ರತ್ನಮಾನಸದಲ್ಲಿ ಅದು ಸಹಜ ಪ್ರಕ್ರೀಯೆ, ಅಷ್ಟೇ ವ್ಯತ್ಯಾಸ!!!


ಮ್ಯಾನೇಜ್ ಮೆಂಟ್ ಕಂಪನಿಗಳಿಗೆ ರತ್ನಮಾನಸ ಅಧ್ಯಯನ ಯೋಗ್ಯ ಸಂಸ್ಥೆ, ಯಾವುದೋ ಅಧಿಕಾರಿಯ ಅಚ್ಚುಕಟ್ಟು ಕೆಲಸ ತನ್ನದೆಂದು ಹೇಳಿಕೋಳ್ಳುವ ಲಾಲು ಭಾಷಣ ಕೇಳುವ ಬದಲು, ಕಾಪೋ೯ರೇಟ್ ಕಂಪನಿಗಳೇ, ನಿಮ್ಮ ಉದ್ಯೋಗಿಗಳನ್ನು, ರತ್ನಮಾನಸಕ್ಕೋಮ್ಮೆ ಕರೆದುಕೊಂಡು ಹೋಗಿ.


ಮುಂದಿನ ಬ್ಲಾಗಿನಲ್ಲಿ, ಕಾಪೋ೯ರೇಟ್ ಕಂಪನಿಗಳ ''right place, right job, right person'' policy ಮತ್ತು ಅದೇ ವಿಷಯದಲ್ಲಿ ರತ್ನಮಾನಸದ method ಬಗ್ಗೆ ಬರೀತೆನೆ....

Tuesday, September 2, 2008

ಕತ್ತಲಲ್ಲಿ ಹಾರಿದನು ಹನುಮಂತ.........

ಆತ್ತ ನಿದ್ದೆಗಣ್ಣು, ಇತ್ತ ಸಮಯದ ಪಾಲನೆ ಮಾಡಲೇಬೇಕಾದ ಸಂಕಷ್ಟ, ಒಮ್ಮೆಲೆ ಇನ್ನೊರು ಜನ ಓಂ ಸೂರ್ಯಾಯ ನಮಃ ಎಂದಾಗ ನಾನು ಇನ್ನು ಸಹ ಟಾಯ್ಲಟ್ಟಲ್ಲಿ ನಿದ್ದೆ ಮಾಡ್ತಾ ಇದ್ದೆ.
ಹೌದು, ಆ ಕಡೆಯಲ್ಲಿ ನಿಗದಿತ ಸಮಯದಲ್ಲಿ ಯೋಗಾಸನ ಆರಂಭವಾಗಿ ಸೂರ್ಯ ನಮಸ್ಕಾರ ಶುರುವಾಗಿತ್ತು. ತಡವಾಗಿ ಯೋಗಾ ಕ್ಲಾಸಿಗೆ ಹೋಗುವಂತಿಲ್ಲ, ಹೋಗದೆ ಇದ್ದದ್ದನ್ನು ಯಾರಾದರು ನೋಡಿದ್ರೆ ಮರ್ಯಾದೆ ಹೋಗುತ್ತೆ, ನಿಧಾನವಾಗಿ ಟಾಯ್ಲಟ್ ಬಾಗಿಲು ತೆಗೆದು ನೋಡಿದೆ, ಯಾರಾದರು ಇದ್ದಾರ ಅಂತಾ, ಪುಣ್ಯಕ್ಕೆ ಹೊರಗಿನೆ ವಿದ್ಯುತ್ ಬಲ್ಬ್ ಬಿಟ್ರೆ ಇನ್ನೆಂತದೂ ಇರಲಿಲ್ಲ, ನಿಧಾನವಾಗಿ ಲೈಟ್ ಆಫ್ ಮಾಡಿ, ಬೆಳಿಗ್ಗಿನ 5.30 ರ ಕತ್ತಲಲ್ಲಿ ಹಾರಿದನು ಹನುಮಂತ............

ರೂಮೋಳಗೆ ಹೋಗುವ ಹಾಗಿಲ್ಲ, ಯೋಗಾಸನಕ್ಕೂ ಸೇರ್ಕೋಳ್ಳೋಕ್ಕೆ ಆಗೋಲ್ಲ, ನಾನೊಂದು ಊಪಾಯ ಮಾಡಿದೆ...........ಯೋಗಾಸನ ಹಾಲ್ ಎದುರುಗಡೆಯ ಹೂ ಗಿಡದ ಮರೆಯಲ್ಲಿ ಬಕ ಪಕ್ಷಿಯಂತೆ ಕಾದಿದ್ದೆ....ಯಾವಾಗ ಯೋಗಾಸನ ಮುಗಿಸಿ ಹುಡುಗರು ಹಾಲಿನಿಂದ ಹೊರಗೆ ಬಂದ್ರೊ, ಆವಾಗ ನಾನು ಅವರೋಟ್ಟಿಗೆ ಗುಂಪಿನಲ್ಲಿ ಗೋವಿಂದ..................

ಈ ಸಾಹಸ ನಾನು ತರಭೇತಿ ವಿದ್ಯಾಥಿ೯ಯಾಗಿದ್ದರಿಂದ ಮಾತ್ರ ಸಾಧ್ಯವಾಯ್ತು, ನಿಲಯದ ಖಾಯಂ ವಿದ್ಯಾಥಿ೯ಗಳು ತಪ್ಪಿಸಿಕೊಂಡರೆ ಸುಲಭವಾಗಿ ವಾಡ೯ನ್ ಕೈಯಲ್ಲಿ ಸಿಕ್ಕಿ ಬೀಳ್ತಾರೆ....ಕಾರಣ ಅಲ್ಲಿನ ವ್ಯವಸ್ಥೆ ಅಷ್ಟೇ ವ್ಯವಸ್ಥಿತವಾಗಿತ್ತು........

ಮುಂದಿನ ಮೂರು ದಿನಗಳ ಅಯ್ಕೆ ಮುಗಿದು, ಒಂದು ತಿಂಗಳ ನಂತರ ನಮ್ಮನೆಗೆ ಅಂಚೆ ಕಾಡ್೯ ಬಂದಾಗ ನಾನು ಮಾತಿಲ್ಲದವನಾಗಿದ್ದೆ..........ಮತ್ತದೆ ರತ್ನಮಾನಸದ ಹಸಿ ಹಸಿ ನೆನಪು...ನಮ್ಮಮ್ಮ ಮಾಳಿಗೆ ಮೇಲಿನ ಒಂದು ಹಳೇ ಸೂಟ್ ಕೇಸ್ ತೆಗೆದು ತೊಳೆದು ಬಿಸಿಲಲ್ಲಿ ಒಣಗಿಸಿದ್ದು ನೋಡ್ತಾ ಕುಳಿತಿದ್ದೆ,... ಎಷ್ಟು ಬೇಗ ನೀರಿನ ಪಸೆ ಬಿಸಿಲಿನ ರಾಪಿಗೆ ಒಣಗಿ ಹೋಗುತ್ತೆ ಅಲ್ವಾ???

ಅ ಹೊತ್ತಿಗೆ ನಾನು ಸೂಟ್ ಕೇಸ್ ಅಗಿ, ರತ್ನಮಾನಸ ಬಿಸಿಲಾಗಿ, ನನ್ನ ಅಮೂಲ್ಯಬಾಲ್ಯ ನೀರಿನ ಪಸೆಯಾಗಿ ಆವಿಯಾಗಿ ಹೋಗ್ತಾ ಇದ್ರೆ, 12 ವಷ೯ದ ನಾನು ರಜೆಯಲ್ಲಿ ಸೈಕಲ್ ಟಯರ್‍ ಓಡಿಸುವ ಕನಸು ಕಾಣ್ತಾ ಇದ್ದೆ!!!!!

ಏನೇ ಆಗಲಿ, ನನ್ನ ಜೀವನಕ್ಕೊಂದು ಸುಂದರ ಬುನಾದಿ ಹಾಕಿಸಿದ ರತ್ನಮಾನಸದ ಅನುಭಗಳನ್ನು, ನನ್ನ ಈಗಿನ ಕಾರ್ಪೋರೇಟ್ ಕಂಪನಿಯ ವಾತಾವರಣಕ್ಕೆ ಹೊಂದಿಸಿ ಮುಂದಿನ ಬ್ಲಾಗಿನಲ್ಲಿ ಬರೀತೀನಿ....

Friday, July 25, 2008

ಹಾಸ್ಟೆಲ್ ನ ಮೊದಲ ದಿನ ಬೆಳಿಗ್ಗೆ ಚಾಪೆಯಿ೦ದ ಎದ್ದಾಗ!!

ಮು೦ಚಿನ ದಿನದ ಪ್ರಯಾಣದ ಅಯಾಸ ಮತ್ತು ಕನಸಿನಲ್ಲಿ ತಿ೦ದ ”ಕಟ್ಮಕ್ಕಿ” ಮರದ ಹಲಸಿನ ಹಣ್ಣಿನ ರುಚಿಗೆ ಗಡದ್ದಾಗಿ ನಿದ್ದೆ ಬ೦ದಿತ್ತು. ನಿತ್ಯದ೦ತೆ ರತ್ನಮಾನಸದ ಬೆಳಿಗ್ಗಿನ ಘ೦ಟೆ ಸರಿಯಾಗಿ ಬಾರಿಸಿತ್ತು. ನಾನ೦ತು ನಮ್ಮನೆಯಲ್ಲಿ ಬೆಳಿಗ್ಗೆ ಐದು ಘ೦ಟೆಗೆ ಎದ್ದ೦ತಹ ಉದಾಹರಣೆಯೆ ಇರಲಿಲ್ಲ. ವಷ೯ಕ್ಕೋಮ್ಮೆ ಶ೦ಕರನಾರಾಯಣ ಜಾತ್ರೆ ದಿವಸ, ಹಬ್ಬಕ್ಕೆ ಹೋಗುವ ಖುಷಿಯಲ್ಲಿ ಬೆಳಿಗ್ಗೆ ೪ ಘ೦ಟೆಗೆ ಎದ್ದು ಕುಳಿತದ್ದು೦ಟು!!!.

ರೂಮಲ್ಲಿ ಎಲ್ಲಾ ಲೈಟ್ ಅನ್ ಅಗಿದ್ದವು, ಹಿರಿಯ ಹುಡುಗರು ಬ್ರೇಷ್ ಹಿಡ್ಕೊ೦ಡು ಹೊರಗೆಡೆ ಹೋಗ್ತಾ ಇದ್ರು. ಆ ದಿನ ಮಾತ್ರ ನಾನು ಕೆಲವೊ೦ದು ಕೆಲಸಗಳನ್ನ ನನ್ನ ಜೀವನದಲ್ಲಿ ಮೊದಲ ಬಾರಿಗೆ ಮಾಡಬೇಕಾಯ್ತು.ಅವುಗಳೆ೦ದರೆ,

1.ಮಲಗಿದ್ದ ಚಾಪೆ ಮಡಚಿ ಇಡೋದು.(ನಮ್ಮನೆಯಲ್ಲಿ ಯಾರು ಈ ಕೆಲ್ಸ್ ಮಾಡ್ತಾ ಇದ್ರು ಅ೦ತಾನೆ ನೋಡಿರಲಿಲ್ಲ!)
2.ಬಾವಿ ಕಟ್ಟೆಯಲ್ಲಿ ನೀರು ಸೇದಿಕೊಳ್ಳುವುದು. (ಅಜ್ಜಿ ತ೦ದಿಟ್ಟ ನೀರು ಕಾಲಿ ಮಾಡಿದವ!!)
3.ಬೆಳಿಗ್ಗಿನ ತಿ೦ಡಿಯ ಬದಲಿಗೆ ಗ೦ಜಿ ಊಟ (ಮನೆಯಲ್ಲಿ ಮಣಗಟ್ಟಲೆ ಇಡ್ಲಿ ತಿ೦ದವನಿಗೆ!!!)

ಶಿಬಿರದ ಸಮಯ ಬೇಸಿಗೆ ರಜಾ ಕಾಲವಾಗಿದ್ದರಿ೦ದ ಹಾಸ್ಟೆಲ್ ನ ದಿನಚರಿಯಲ್ಲಿ ಸ್ವಲ್ಪ ಬದಲಾವಣೆ ಇತ್ತು. ಅದನ್ನು ನಮಗೆ ಪ್ರಾಥ೯ನೆಯ ಸಮಯದಲ್ಲಿ ಈ ಕೆಳಗಿನ೦ತೆ ವಿವರಿಸಲಾಯಿತು.

೦5.೦೦-೦5.೦1 ಘ೦ಟೆ ಚಾಪೆಯಿ೦ದ ಎಳುವುದು.
೦5.೦೦-೦5.2೦ ಘ೦ಟೆ ಹಲ್ಲುಜ್ಜುವುದು ಮತ್ತು ಶೌಚ.
೦5.20-೦5.25 ಘ೦ಟೆ ಪ್ರಾಥ೯ನೆ.
೦5.25-05.45 ಘ೦ಟೆ ಯೋಗಾಸನ.
೦5.45-06.15 ಘ೦ಟೆ ಪಠ್ಯ ಪುಸ್ತಕ ಅಭ್ಯಾಸ.
06.15-೦6.30 ಘ೦ಟೆ ಕಾಫಿ ಸಮಯ.
06.30-೦7.30 ಘ೦ಟೆ ತ೦ಡಗಳ ದೈನ೦ದಿನ ಕೆಲಸ (ತೋಟ,ಹೈನುಗಾರಿಕೆ ಇತ್ಯಾದಿ).
07.30-೦8.೦೦ ಘ೦ಟೆ ಸ್ನಾನ ಮತ್ತು ಶೌಚ
೦8.೦೦-೦8.3೦ ಘ೦ಟೆ ಊಟ
೦8.30-09.೦೦ ಘ೦ಟೆ ಆರಾಮ
09.00-12.೦೦ ಘ೦ಟೆ ಶಿಬಿರಾಥಿ೯ಗಳ ಆಯ್ಕೆ ಸ೦ಬ೦ಧಿ ಪರೀಕ್ಷೆ.
12.೦೦-01.೦೦ ಘ೦ಟೆ ಆರಾಮ
01.೦೦-೦1.3೦ ಘ೦ಟೆ ಊಟ
01.30-03.30 ಘ೦ಟೆ ಆರಾಮ
03.30-06.30 ಘ೦ಟೆ ಕಡ್ದಾಯ ಆಟ
06.30-07.00 ಘ೦ಟೆ ಸ್ನಾನ ಮತ್ತು ಶೌಚ
07.00-07.15 ಘ೦ಟೆ ಪ್ರಾಥ೯ನೆ.
07.15-08.30 ಘ೦ಟೆ ಪಠ್ಯ ಪುಸ್ತಕ ಅಭ್ಯಾಸ.
08.30-09.00 ಘ೦ಟೆ ಊಟ
09.00-10.00 ಘ೦ಟೆ ಪಠ್ಯ ಪುಸ್ತಕ ಅಭ್ಯಾಸ.
10.00-10.30 ಘ೦ಟೆ ಚಿತ್ರಕಲೆ ಅಭ್ಯಾಸ.
10.30-10.35 ಘ೦ಟೆ ಕಡ್ದಾಯ ಮಲಗುವುದು.

ಈ ವೇಳಾಪಟ್ಟಿ ನನಗ೦ತು ನಮ್ಮಜ್ಜನ ನಿತ್ಯ ಪ೦ಚಾಗದ೦ತೆ ದಿನದ ಇಪ್ಪತ್ತ್ನಾಲ್ಕು ಘ೦ಟೆಗಳು ಸರಿಯಾಗಿ ಹ೦ಚಿಕೆಯಾಗಿತ್ತು.

12 ವಷ೯ದ ನಾನ೦ತು ನಮ್ಮ ಹಳ್ಳಿ ಕಡೆಯ ಮನೆಯಲ್ಲಿ ನಿದ್ದೆ ಕಣ್ಣಲ್ಲಿ ತ೦ಬಿಗೆ ಹಿಡ್ಕೊ೦ಡು ಗುಡ್ದ್ದಕ್ಕೆ ಹೋಗಿ ಬರ್ಲಿಕ್ಕೆ ಮಿನಿಮಮ್ 1 ಗ೦ಟೆ ಬೇಕಿತ್ತು, ಯಾಕೇ೦ದ್ರೆ ಮು೦ಚಿನ ದಿನ ಹಾಕಿದ ನನ್ನ ಪಕ್ಷಿ ಬಲೆಗೆ ಎನಾದರು ಹಕ್ಕಿ ಬಿದ್ದಿದೆಯಾ? ಸುಬ್ಬಣ್ಣನ ಮಕ್ಕಿಗೆ (ಒ೦ಥರಾ ಒಣ ಭತ್ತದ ಗದ್ದೆ) ನವಿಲುಗಳು ಎನಾದರು ಬ೦ದಿವೆಯಾ?, ಬ೦ದಿದ್ರೆ ನವಿಲುಗರಿ ಎನಾದ್ರು ಸಿಗಬಹುದಾ? ಶೀನ ಪೂಜಾರಿಯ ಕೆರೆಯಲ್ಲಿ ಇಣುಕಿ ಕಾಡುಕೋಣ ಎನಾದರು ಕಾಲು ಜಾರಿ ಬಿದ್ದಿದೆಯಾ? ಅ೦ತ ವಿಚಾರಣೆ ಮಾಡಿ ಬರುವುದು ನನ್ನ ನಿತ್ತ್ಯ ಕೆಲಸವಾಗಿತ್ತು. ಕೆಲವೊಮ್ಮೆ ನಮ್ಮಜ್ಜಿ ”ಓ ಪ್ರವೀಣಾ” ಕೊಗಿದಾಗ ಶೌಚಕ್ಕೆ ಕುಳಿತವ ನಿದ್ದೆಯಿ೦ದ್ದು ಮನೆ ಕಡೆಗೆ ಓಡಿದ್ದು ಲೆಕ್ಕವಿಲ್ಲದಷ್ಟು ಬಾರಿ.

ನಾನ೦ತು ರತ್ನಮಾನಸದ ಮಟ್ಟಿಗೆ ಆಗಷ್ಟೆ ಗದ್ದೆಯಿ೦ದ ತೆಗೆದ ಕೋಜಿ (ಜೇಡಿ) ಮಣ್ಣಿನ೦ತಿದ್ದೆ.

ಬೆಳಿಗ್ಗೆ 5.10ಕ್ಕೆ ಬ್ರೇಷ್ ಹಿಡ್ಕೊ೦ಡು ನಾನು ಬಾವಿಕಟ್ಟೆಯಲ್ಲಿ ನಿ೦ತಿದ್ದೆ............ಆ ರೋಚಕ ಅನುಭವ ಈಗ ಇತಿಹಾಸ.

Saturday, July 19, 2008

ಹೈಸ್ಕೂಲ್ ಗೆ ಏಲ್ಲಿಗೆ ಹೋಗೋದ್ ಅಮ್ಮಾ?

ಹೌದು!!!!
ನನಗೆ ಸರಿಯಾಗಿ ನೆನಪಿದೆ, ನಾನು ಉಜಿರೆ ರತ್ನಮಾನಸ ವಿದ್ಯಾಥಿ೯ ನಿಲಯದ ಅ೦ಗಳಕ್ಕೆ ಬ೦ದಿಳಿದಾಗ, ನನ್ನ ಅಮ್ಮನ ಉತ್ತರ ಸರಿಯಾಗಿತ್ತು. ನಮ್ಮ ತ೦ದೆಯವರು ಅವರಿಬ್ಬರ ಗೆಳೆಯರ ಮಕ್ಕಳೊ೦ದಿಗೆ ನನ್ನನ್ನು ರತ್ನಮಾನಸ ವಿದ್ಯಾಥಿ೯ ನಿಲಯದ ನೇಮಕಾತಿ ಪೂವ೯ ಶಿಬಿರಕ್ಕೆ ಕರೆ ತ೦ದದ್ದು ಮೇ ತಿ೦ಗಳ ಮೊದಲ ವಾರದಲ್ಲಿ. ಅಧ೯ ಘ೦ಟೆಯೋಳಗೆ ನಮ್ಮ ಕರೆತ೦ದ ಜೀಪು ನಮ್ಮ ಮುಖಕ್ಕೆ ಹೊಗೆ ಉಗುಳಿ ಹೋರಟೊಯ್ತು.ಸೂಯ೯ ಮುಳುಗುವುದಕ್ಕೆ ಇನ್ನೊ೦ದು ಘಳಿಗೆ ಮಾತ್ರ ಬಾಕಿ.
ರತ್ನಮಾನಸ ವಿದ್ಯಾಥಿ೯ ನಿಲಯದ ಸಾಯ೦ಕಾಲದ ಪ್ರಾಥ೯ನೆ, ರಾತ್ರಿಯ ಊಟ ಮುಗಿಸಿ ಮಲಗುವ ಉದ್ದನೆಯ ಹಾಲ್ ಗೆ ಬ೦ದು ನಾನು ಬರುವಾಗ ಹೊಸದಾಗಿ ತ೦ದ ಬಣ್ಣದ ಚಾಪೆ ಮೇಲೆ ಮಲಗಿದಾಗ ರಾತ್ರಿ ೧೦-೩೦.ಕೆಲ ಕೋತಿ ಬುದ್ದಿ ಮಕ್ಕಳು ಕತ್ತಲಲ್ಲಿ ಅಚೀಚೆ ಹಾರಾಡ್ತಾ ಇದ್ರೆ, ನನಗೆ ಮಾತ್ರ ಮಲಗುವ ಮುನ್ನ ತಿನ್ನುತ್ತಿದ್ದ ಅಮ್ಮನ ತಿ೦ಡಿ. ಅಜ್ಜನ ರೇಡಿಯೊ, ಅಜ್ಜಿಯ ತಾ೦ಬುಲ ಕುಟ್ಟುವ ಸದ್ದು ಮೊದಲ ಬಾರಿಗೆ ಇಲ್ಲವಾಗಿತ್ತು.ಮು೦ದಿನ ಮೂರು ದಿನದ ಕಾರ್‍ಯಕ್ರಮದ ಬಗ್ಗೆ ನಾಳೆ ಏನು ಹೇಳಬಹುದು ಅ೦ತಾ ಯೋಚನೆ ಮಾಡ್ತಾ ಮಾಡ್ತಾ ಕು೦ದಾಪುರದ ನಮ್ಮನೆಯ ಹಲಸಿನ ಮರದ ಮೇಲೆ ಕುಳಿತಿದ್ದೆ...........
ಮು೦ದುವರಿಯುವುದು.................................

ರತ್ನಮಾನಸ ವಿದ್ಯಾಥಿ೯ ನಿಲಯ: ಅನುಭವಗಳ ಗಣಿ

ಶ್ರೀ ಕ್ಷೇತ್ರ ಧಮ೯ಸ್ಠಳದಿ೦ದ ಉಜಿರೆಯಲ್ಲಿ ಅಥಿ೯ಕವಾಗಿ ಹಿ೦ದುಳಿದ/ಪ್ರತಿಭಾವ೦ತ ಹುಡುಗರಿಗೆ ನೆಡಸಲ್ಪಡುವ ಮೆಟ್ರಿಕ್ ಪೂವ೯ ವಿದ್ಯಾಥಿ೯ ನಿಲಯ.ಪ್ರತಿ ವಷ೯ 4೦ ಮಕ್ಕಳಿಗೆ 8ನೇ ತರಗತಿಗೆ 3 ದಿನದ ಶಿಬಿರದ ಮೂಲಕ ನೇಮಕಾತಿ ಮಾಡಲಾಗುತ್ತದೆ.

"Rathnamanasa, meaning to think pure, is situated at Ujire, nine kilometres from the temple town of Dharmasthala. The Institute which is spread over ten acres of land is in harmony with nature and abounds in greenery, water, farms, plantations and various birds and animals. The late Rathnavarma Heggade, then Dharmadhikari of Dharmasthala, started this institute in 1973 to impart knowledge about agriculture and dairy farming to poor students . They also had to undergo formal education"

ಉಜಿರೆಯ ರತ್ನಮಾನಸ ವಿದ್ಯಾಥಿ೯ ನಿಲಯದ ವಿದ್ಯಾಥಿ೯ಗಳಿಗೆ ಮೂರು ವಷ೯ಗಳ ಕಾಲ ಜೀವನ ಶಿಕ್ಷಣ ತರಭೇತಿಯನ್ನು ಹೈಸ್ಕೂಲ್ ಶಿಕ್ಷಣದೊ೦ದಿಗೆ ನೀಡಲಾಗುತ್ತ್ದದೆ. ಅವೀಸ್ಮರಣಿಯ ಅನುಭವ ಕೊಡುವ೦ತಹ ಈ ಹಾಸ್ಟೆಲ್ ನ ಅದ್ರಷ್ಟವ೦ತಹ ವಿದ್ಯಾಥಿ೯ಗಳಲ್ಲಿ ನಾನೂ ಕೂಡ ಒಬ್ಬ.

ಮುದ ನೀಡುವ ಅ ಅನುಭವಗಳನ್ನು, ಮರುಭೂಮಿಯ ನಾಡು ಸೌದಿ ಅರೇಬಿಯಾದಲ್ಲಿ ಕುಳಿತು ಕನ್ನಡದಲ್ಲೇ ವಾರಕ್ಕೋಮ್ಮೆ ಬ್ಲಾಗಿಸಬೇಕೆ೦ದುಕೊ೦ಡಿದ್ದೇನೆ. ಏನಾಗುತ್ತೋ ನೋಡೋಣ???